ನಕ್ಕರೆ, ನೋಡಿದರೆ, ಬೆವರಿದರು - ಸೀನಿದರೂ ಮಕ್ಕಳಾಗ್ತವೆ ಪುರಾಣಗಳಲ್ಲಿ. ರಾಮ ನಡೆದಲ್ಲೆಲ್ಲ ರೋಮ ಉದುರಿಸಿದ್ದನೇನೋ! ನಮ್ಮ ಬಹಳಷ್ಟು ಗಂಡಸರಿಗೆ ಸಂಶಯ ವಂಶವಾಹಿ!! ~ ಬೆಂಕಿಗೆ ಸೀತೆಯನ್ನ ಸುಡಲಾಗಲಿಲ್ಲ ರಾಮನ ಸಂಶಯವನ್ನೂ... ~ ಹಳಬನಾಗೋದಿಲ್ಲ ರಾಮ, ಅವನ ಕಥೆಯೂ... ಇಲ್ಲಿ ಹೆಣ್ಣುಗಳು ಇನ್ನೂ ತಿರಸ್ಕರಿಸಲ್ಪಡುತ್ತಲೇ ಇದ್ದಾರೆ ಅನುಮಾನದಲ್ಲಿ. ~ ರಾಮನಿಗೆ ಅಗ್ನಿದಿವ್ಯಕ್ಕಿಂತ ಮಡಿವಾಳನ ಮಾತೇ ಹೆಚ್ಚಾಗಿದ್ದು ಅವು ತನ್ನವೂ ಆಗಿದ್ದವೆಂದೇ ತಾನೆ? ಇಲ್ಲದಿದ್ದರೆ ಅಂವ ಶಂಭೂಕನನ್ನ ಕೊಲ್ತಿರಲಿಲ್ಲ... ~ ಶಂಭೂಕರು ಮತ್ತು ಸೀತೆಯರನ್ನು ಗೋಳಾಡಿಸುವ ನೆಲಕ್ಕೆ ನೆಮ್ಮದಿ ಮರೀಚಿಕೆ.... Continue Reading →
ಭಾಮಿನಿ ಷಟ್ಪದಿ
ಭಾಮಿನಿ ಷಟ್ಪದಿಯ ಪ್ರತಿಗಳು ಖಾಲಿಯಾಗಿವೆ. ಪುನರ್ಮುದ್ರಣ ಮಾಡುವ ಬದಲು ಹೀಗೆ ಪಿಡಿಎಫ್ ಪ್ರತಿ ಅಪ್ಲೋಡ್ ಮಾಡಿದರೆ ಆಸಕ್ತರೆಲ್ಲರೂ ಓದಿಕೊಳ್ಳಬಹುದು. ಇಷ್ಟವಾಗಲಿಲ್ಲವೆಂದರೆ ದುಡ್ಡು ದಂಡವಾಯ್ತೆಂದು ಗೊಣಗಿಕೊಳ್ಳುವ ಗೋಜಿಲ್ಲ... bhamini ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪುಟಗಳು ತೆರೆದುಕೊಳ್ಳುವವು.... bhamini
ಎರಡು ಪದ್ಯಗಳ ನಡುವಿನ ಅಂತರ….
ನೆನ್ನೆ ಒಂದು ಪದ್ಯ ಬರೆದೆ... ~ ಕಲ್ಲು ದೇವರನ್ನೆ ಪ್ರೇಮಿಸಬೇಕು!~ ಬಹಳ ಸರ್ತಿ ಅನ್ನಿಸತ್ತೆ ಕಲ್ಲು ದೇವರನ್ನೆ ಪ್ರೇಮಿಸೋದು ಒಳ್ಳೇದು. ಅಂವ ಮೈ ಮುಟ್ಟೋದಿಲ್ಲ, ಕೂಡು ಬಾರೆಂದು ಕಾಡೋದಿಲ್ಲ. ಅಕ್ಕ, ಮೀರಾ, ಲಲ್ಲಾ, ಆಂಡಾಳ್, ನಾಚ್ಚಿಯಾರ್, ಅವ್ವೈಯಾರ್ ಜಾಣೆಯರ ಸಾಲು ಹೇಳಿ ಹೋದ ಪಾಠ ಇದೇ ಇರಬೇಕು! - ಅಂತ.... ~ ಬಹಳ ಹಿಂದೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಒಂದು ಪದ್ಯ ಬರೆದಿದ್ದೆ... ~ ಆತ ಸಜೀವ ಗಂಡಸಾಗಿದ್ದ~ ಮಹಾದೇವಿ ಅಕ್ಕ ಆಗಿದ್ದು ಕೈ ಹಿಡಿದವನ ಬಿಟ್ಟು ಕಲ್ಲು... Continue Reading →
’ಕಬ್ಬಿ’ಗಳ ಹಳ್ಳಿಕಥೆಯು….
ಗೆಳೆಯ ಕಬ್ಬಿನ ತುಂಡುಗಳನ್ನು ತಂದಿದ್ದ. ತಿನ್ನಲು ಅನುಕೂಲವಾಗಲೆಂದು ಸಿಪ್ಪೆಯನ್ನ ತೆಳುವಾಗಿ ಹೆರೆಸಿದ್ದ. ಮನೆಗೊಯ್ದ ನಾನು ಅವುಗಳಲ್ಲೊಂದು ತುಂಡು ಎತ್ತಿಕೊಂಡೆ.ಹಳ್ಳಿಯಲ್ಲೆ ಹುಟ್ಟಿ ಬೆಳೆದಿದ್ದರೂ ಹಳ್ಳಿತನ ಬಗೆದರೂ ಸಿಗದ ಮಗನೆದುರು ’ನಮ್ಮ ಕಾಲದ’ ಭಾಷಣ ಬಿಗಿಯುತ್ತ ನೀನೂ ತಿನ್ನು ಅಂತ ಒತ್ತಾಯಪಡಿಸಿದೆ. ಕೈಗೆತ್ತಿಕೊಂಡಿದ್ದೇನೋ ಸರಿ... ಜನವರಿಯಲ್ಲಿ ಚಳಿಗಾಲ, ಕಬ್ಬು ತಿಂದರೆ ತುಟಿ ಒಡೆಯೋದಿಲ್ವಾ? ಅಮ್ಮನ್ನ ಕೇಳಿದ್ದಕ್ಕೆ ’ತಲೆಕಾಯಿ ಬಜ್ಜಿ’ ಅಂದಳು. ಆಮೇಲೆ... ಇಲ್ಲಿ ನೋಡಿ 🙂
ಹಕ್ಕಿ ಹೆಜ್ಜೆಯ ಗುರುತು
ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. 'ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು' ಅಂದೆ. ಹಾಗೇ ಎದ್ದು ಬಂದೆ ಕೂಡಾ. ಹೀಗೆ ವರ್ಷಕ್ಕೊಂದು ಸಾರ್ತಿ ಹೊಸ್ತಿಲ ಮೇಲೆ ನಿಂತುಕೊಂಡು ಒಳಹಣಕಿ ನೋಡೋದೊಂದು ಮಜಾ. ಆಯಾ ಹೊತ್ತಿನಲ್ಲಿ ಖುಷಿಯವು, ದುಃಖದವು ಎನ್ನಿಸಿದ್ದ ಘಟನೆಗಳೆಲ್ಲವನ್ನ ಸಿನೆಮಾದಂತೆ ನೋಡಿ ಒಂದು ನಿರುಮ್ಮಳದ ಉಸಿರು ತಳ್ಳುವುದು ಕೂಡ. ಅದೊಂದು ನೋವಿಗೆ... Continue Reading →
ಸರಳ ರೇಖೆಯ ಸಂಕೀರ್ಣ ಅಳತೆ
ಇವತ್ತು ಸಖತ್ ಹರ್ಟ್ ಆಗ್ಬಿಟ್ಟಿದೆ. ತಗೋ, ಮತ್ತೊಂದು ಕಥೆ ಶುರು! ಅದು ಆಗೊದೇ ಹಾಗೆ. ಎಲ್ಲ ಸುಕೂನವಿದ್ದುಬಿಟ್ರೆ ಕಥೆಗೆ ಜಾಗವಿರೋದಿಲ್ಲ. ಖುಷಿ ಇದ್ದಲ್ಲಿ ಕಥೆ ಮುಗೀತದೆ. ಇವಳ ವಿಷಯ ಹಾಗಲ್ಲ. 'ಸದ್ಯ, ದಡ ಹತ್ತಿದಳು' ಅಂದ್ಕೊಳ್ಳುವಾಗಲೆ `ಸಶೇಷ' ಅನ್ನುತ್ತಾಳೆ. ಅವಳು ಮಗು ಥರ. ಪೂರಾ ಮಕ್ಕಳ ಥರ. ಅವಕ್ಕೆ ಗೊತ್ತಿರುತ್ತೆ. ಅತ್ತರೇನೇ ಅಮ್ಮ ಬಂದು ಎತ್ಕೊಳೋದು. ರಚ್ಚೆ ಹಿಡಿದರೇನೇ ಮೊಲೆತೊಟ್ಟು ಬಾಯಿಗಿಡೋದು. ಇವಳೂ ಅಂದ್ಕೊಂಡುಬಿಟ್ಟಿದಾಳೆ, ನೋವುಗಳನ್ನೆಲ್ಲ ಮುಖಕ್ಕೆಳೆದು ಗುಡ್ಡೆ ಹಾಕ್ಕೊಂಡರೇನೆ ಗಮನ ಹರಿದು ಬರೋದು. ಅವತ್ತು ಹಾಗೇ... Continue Reading →
ದಸರೆಯ ಬೆಳಗಿನಲ್ಲಿ ಹಣಕಿ ಬಂದ ಹುಲಿವೇಷ
ಡಂಡರಡಟ್ಟರ ಡಂಡರಡಟ್ಟರ ಡಂಡರ…. ಪಟ್ಟೆಪಟ್ಟೆ ಹುಲಿರಾಯ ಬಾಯಲ್ಲಿ ನಿಂಬೆ ಹಣ್ಣು ಕಚ್ಚಿಕೊಂಡು ಕುಣೀತಿದ್ದರೆ ಕಾಲು ನಿಲ್ಲುತ್ತಿರಲಿಲ್ಲ ನಂದು. ಕುಣಿತದ ಲಯಕ್ಕೆ ನನ್ನ ಕೊಟ್ಟುಕೊಳ್ಳುತ್ತಾ ಹುಲಿಯ ಚೂಪು ಉಗುರು, ಕೋರೆ ಹಲ್ಲುಗಳೆಲ್ಲ ಮರೆತು ಬರೀ ಶಬ್ದದ ಮೋಡಿ ಉಳಿಯುತ್ತಾ ಹುಲಿ ವೇಷ ತೊಟ್ಟು ಕೆಂಪಗಿನ ಕಣ್ಣು ಗಿರ್ರನೆ ತಿರುಗಿಸ್ತಾ ಕುಣಿಯುತ್ತಿದ್ದವರ ಪಟ್ಟಿನಲ್ಲಿ ಕಳೆದುಹೋಗುತ್ತಾ… ಅಪ್ಪ ಬಯ್ತಿದ್ದರು. ಗಂಡುಬೀರಿ ಹಾಂಗೆ ನಡೂ ಅಂಗಳದಲ್ಲಿ ನಿಂತುಕೊಳ್ಳೋದು ಎಂತಕ್ಕೆ? ಬಾರೆ ಒಳಗೆ… ನಾನು ಒಳಗೆ ಹೋಗುತ್ತಿದ್ದೆ, ಜಾಣ ಮಗಳಂತೆ. ಹಿತ್ತಿಲ ಬಾಗಿಲು ನನಗಾಗಿ... Continue Reading →
ಜಮ್ಮು, ಕಾಶ್ಮೀರ ಮತ್ತು ಲಡಾಖ್ ~ 1
ಟೇಕ್ ಆಫ್ ನನ್ನ ಪಾಲಿಗೆ ಯಾವುದಾದರೂ ಒಂದು ಊರು ನೋಡೋದು ಅಂದರೆ ಅಲ್ಲಿನ ಪ್ರಸಿದ್ಧ ಸ್ಮಾರಕಗಳನ್ನೋ ಚೆಂದದ ಕಟ್ಟಡಗಳನ್ನೋ ಅಥವಾ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳನ್ನೋ ನೋಡುವುದಲ್ಲ. ಅಥವಾ ಹಾಗೆ ಅವಷ್ಟನ್ನು ನೋಡುವುದು ಮಾತ್ರ ಅಲ್ಲ. ನಾನು ಹೋಗುವ ಊರಿನ ಒಳಹೊಕ್ಕು ಅಲ್ಲಿಯೂ ಇರುವ ನನ್ನ ಜನರನ್ನೆಲ್ಲ ಹಾದು ಬಂದಾಗಲೇ ನನ್ನ ಪ್ರವಾಸ ಪರಿಪೂರ್ಣವಾಗೋದು. ಹೀಗೇ ಇತ್ತು ನಮ್ಮ ಈ ಸರ್ತಿಯ ಜಮ್ಮು- ಕಾಶ್ಮೀರ- ಲಡಾಖ್ ಪ್ರವಾಸ ಕೂಡಾ. ನಮ್ ಟೀಮ್ ಸಾಮಾನ್ಯವಾಗಿ ನಾವು ಪ್ರವಾಸ ಹೊರಡುವಾಗ... Continue Reading →
ಶಾಪಗ್ರಸ್ಥ ಕಿನ್ನರಿಗೆ ಹೂಘಮವೇ ತಲೆನೋವು
ಆಗಾಗ ನನಗೆ ನಾನೊಬ್ಬ ಶಾಪಗ್ರಸ್ಥ ಕಿನ್ನರಿ ಅಂತ ಅನ್ನಿಸೋದಿದೆ. ಪ್ರತಿ ಜೀವಕೋಶ ಹುಚ್ಚೆದ್ದು ಕುಣೀವಾಗಲೂ ಕುಣಿಯಲಾಗದ, ಜೀವವೇ ಹಾಡಾಗಿ ಹರೀವಾಗಲೂ ಹಾಡಲು ಬರದ, ಚಿತ್ರಗಳನ್ನ ತಿಂದುಬಿಡುವಷ್ಟು ಲಾಲಸೆಯಿಂದ ನೋಡುವುದಿದ್ದರೂ ಕುಂಚ ಕೈಯಲ್ಲಿ ಹಿಡಿಯಲೂ ಬರದ ಈ ಜನ್ಮ, ಏನೋ ತರಲೆ ಮಾಡಿ ಭೂಮಿಗೆ ದಬ್ಬಿಸ್ಕೊಂಡ ಕಿನ್ನರಿಯದ್ದೇ ಅನ್ನೋದು ನನ್ನೊಳಗಿನ ಆಲೀಸ್ಗಂತೂ ಖಾತ್ರಿ ಇದೆ. ಅದು ಆಲೀಸಳ ಜಗತ್ತಿನಿಂದ ಹೊರಗೂ ಖಾತ್ರಿಯಾಗತೊಡಗಿದ್ದು, ಮಲ್ಲಿಗೆ ಸುಗಂಧ ನನ್ನ ಜೀವ ಬೇಡಲು ಮುಂದಾದ ಸಂದರ್ಭದಲ್ಲಿ... ~ ನಾನು ಓದುವ ಕಾಲಕ್ಕೆ ಸಿಟಿ... Continue Reading →
ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….
'ಆಹ್! ಚೆಂದವಿದೆ!' ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. - ಹಾಗನ್ನುತ್ತೆ ತಾವೋ. 'ನಾ ನಿನ್ನ ಪ್ರೀತಿಸ್ತೀನಿ' ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು. ~ ಎಷ್ಟು ನಿಜ ನೋಡಿ... ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು... ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ... Continue Reading →