ಅಮ್ಮ ಕಾಲ್ ಮಾಡಿದ್ದಳು. “ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು. ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ... “ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ.... Continue Reading →
ಇದು ನಮ್ಮ ಅಳಿಲುಸೇವೆ, ನೀವೂ ಕೈಜೋಡಿಸ್ತೀರಾ?
ಹೌದು. ತಮ್ಮೆಲ್ಲ ಸ್ವಾರ್ಥ, ಸ್ವಂತದ ತಲೆಬಿಸಿಗಳ ನಡುವೆಯೂ ನೈಸರ್ಗಿಕ ದುರಂತ, ಯುದ್ಧವೇ ಮೊದಲದ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುವ ಮೂಲಕ ನಮ್ಮ ಜನ ತಮ್ಮ ನೈಜ ಸಹೃದಯತೆಯನ್ನು ತೋರಿಸಿಕೊಟ್ಟಿದಾರೆ. ಸುನಾಮಿ ಬಂದೆರಗಿದಾಗ ಇತರ ದೇಶಗಲ ಸಹಾಯವನ್ನು ತಿರಸ್ಕರಿಸುವಷ್ಟು ಮಟ್ಟಿಗೆ ನಮ್ಮವರ ಸಹಾಯ ಕಾಣಿಕಎಗಳು ಹರಿದು ಬಂದಿತ್ತು, ಥೇಟ್ ಸುನಾಮಿಯ ಹಾಗೇ! ಜೊತೆಗೆ, ಅದನೆಲ್ಲ ಹಂಚುವ ಕೈಗಳು ಶುದ್ಧವಾಗಿರಬೇಕೆನ್ನುವುದಷ್ಟೆ ಗಮನಿಸಬೇಕಾದ ಸಂಗತಿ. ಅಂತಹ ಶುದ್ಧ ಹಸ್ತರಿಗೂ ಕಡಿಮೆಯೇನಿಲ್ಲ. ನಾವು ಅಷ್ಟೆಲ್ಲ ನಿರಾಶಾವಾದಿಗಳಾಗಬೇಕಿಲ್ಲ ಅಲ್ಲವೆ? ಇರಲಿ. ಈಗ ಹೇಳಹೊರಟಿರೋದು ಉತ್ತರ ಕರ್ನಾಟಕದಲ್ಲಿ... Continue Reading →
ಶೋಭಾ ತಲೆದಂಡ- ಎಲ್ಲ ಮುಗಿದ ಮೇಲೆ, ನನ್ನ ನಾಲ್ಕು ಮಾತು…
ರಾಜಕಾರಣದ ಬಗ್ಗೆ ಯಾವತ್ತೂ ಬರೆಯಬಾರದು ಅಂತ ಇದ್ದೆ. ಸುಮ್ಮನಿರಲಾಗಲಿಲ್ಲ. ಬರೆದಿದ್ದನ್ನ ಇಲ್ಲಿ ಪೋಸ್ಟ್ ಮಾಡಬಾರದು ಅಂತಲೂ ಇದ್ದೆ. ಆಗಲೂ ಸುಮ್ಮನಿರಲಾಗಲಿಲ್ಲ. ಶೋಭಾ ತಲೆದಂಡ ಪ್ರಹಸನವನ್ನ ಇಟ್ಟುಕೊಂಡು ನಾಲ್ಕು ಮಾತಾಡುವ ಅನಿಸಿತು. ಗೊತ್ತು, ಇದರಿಂದೇನೂ ಉಪಯೋಗವಿಲ್ಲ! ಸಿಂಹಾಸನದ ಉಳಿಕೆಗೆ ಪ್ರಾಣಿ, ಪಕ್ಷಿ, ಚಿಕ್ಕ ಮಕ್ಕಳನ್ನು ಬಲಿಕೊಡುತ್ತಿದ್ದುದು ವಾಡಿಕೆ. ಅದೇ ಯಾದಿಯಲ್ಲಿ ಹೆಣ್ಣನ್ನೂ ಸೇರಿಸಿರೋದ್ರಿಂದಲೋ ಏನೋ, ಯಡ್ಯೂರಪ್ಪರ ಪಟ್ಟ ಉಳಿಸಲಿಕ್ಕೆ ಶೋಭಾ ಕರಂದ್ಲಾಜೆಯ ಬಲಿ ನೀಡಿಕೆ ಸಾಂಗವಾಗಿ ನೆರವೇರಿದೆ. ಶುರುವಿನಿಂದಲೂ ‘ಶೋಭಾ ರಾಜೀನಾಮೆ ನೀಡಬೇಕು’ ಎಂದು ಹಾಡಿಕೊಳ್ತಾ ಬಂದಿದ್ದ ಗಣಿಧಣಿ... Continue Reading →
ನಾವಡರ ಹೊಸ ಸಾಹಸ!
ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ... ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ. ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ. ಹೆಚ್ಚಿನ ಮಾಹಿತಿಗೆ ಭೇಟಿ... Continue Reading →
……… ಇದಕ್ಕೆ ಕಾರಣವೇನಿರಬಹುದು?
‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ, ``ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ" . ಇದಕ್ಕೆ ಕಾರಣವೇನಿರಬಹುದು? ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ. ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು.... Continue Reading →
‘ಜಂಭಗಾತಿ’ ಹುಡುಗಿಯನ್ನ ಎದುರಿಟ್ಟುಕೊಂಡು…
ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ.... ಚಿತ್ರ ನಟಿ ರಮ್ಯಾ ನೃತ್ಯ ನಿರ್ದೇಶಕರನ್ನ, ಸ್ಪಾಟಲ್ಲಿದ್ದ ಕೆಲವರನ್ನ ಅವಾಚ್ಯವಾಗಿ ಬಯ್ದು, ಸುದ್ದಿಯಾಗಿ ಕ್ಷಮೆ ಕೇಳಿದ ಘಟನೆ ಇವತ್ತಿಗೆ ಹಳೇಹಪ್ಪಟ್ಟೆನಿಸಬಹುದು. ರಮ್ಯಳೋ, ರಂಜಿತಳೋ, ಯಾವ ನಟಿ, ನಟ, ನಿರ್ದೇಶಕ, ಒಟ್ಟಾರೆ ಮನುಷ್ಯ ಜಾತಿಯ ಜೀವಿಯೋ, ಹಾಗೆಲ್ಲ ಅಸಭ್ಯವಾಗಿ ವರ್ತಿಸೋದು ಶುದ್ಧ ತಪ್ಪು.... Continue Reading →
ಹೊಸ ತಲೆಮಾರು, ಹೊಸ ಚಿಗುರು….
ಹೊಸ ತಲೆಮಾರಿನ ಹೊಸ ತಾಣ.... http://www.hosachiguru.wordpress.com ಸಧ್ಯಕ್ಕೆ ಕಥೆ, ಕವಿತೆ, ಹೊಸಚಿಗುರುಗಳ ಕಿರು ಪರಿಚಯಗಳು ಮೂಡಿವೆ. ಇದು ನಿಮಗೂ ಖುಷಿ ಕೊದಬಹುದನ್ನೋದು ನನ್ನ ಅನಿಸಿಕೆ. ನಲ್ಮೆ, ಚೇತನಾ
ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!
ಇದು ಬಹಳ ತಿಂಗಳುಗಳ ಹಿಂದಿನ ಕಥೆ. ಒಂದಷ್ಟು ಜನ ’ಐ ಯಾಮ್ ಲೀವಿಂಗ್ ಬ್ಯಾಂಗಲೋರ್’ ಅಂತ ಕಮ್ಯುನಿಟಿಗಳನ್ನ ಮಾಡಿಕೊಂಡು ನಮ್ಮೂರಿನ (!?) ಬಗ್ಗೆ ಕಂಪ್ಲೇಂಟುಗಳನ್ನು ಹೇಳುತ್ತ, ಇಲ್ಲಿನ ಜನಗಳನ್ನು ಹೀಯಾಳಿಸುತ್ತ ದೊಡ್ಡ ದೊಡ್ಡ ಪೋಸ್ಟರುಗಳನ್ನು ಹಾಕಿಕೊಂಡು ಗುಲ್ಲು ಮಾಡಿದ್ದರು. ಹಾಗೆ ಬೆನ್ನು ತಿರುಗಿಸಿ ನಿಂತವರ ಕಡೆ ಕ್ಯಾರೇ ಅನ್ನದೆ ಜನ ಜೀವನ ನಡೆದುಕೊಂಡು ಹೋಯ್ತು ನೋಡಿ, ಎಲ್ಲವೂ ತಣ್ಣಗಾಯ್ತು. ಬೆಂಗಳೂರಂಥಾ ಬೆಂಗಳೂರಲ್ಲೇ ಇವರಿಷ್ಟು ಕ್ಯಾತೆ ತೆಗೀತಾರೆನ್ನುವುದಾದರ ಜಗತ್ತಿನ ಯಾವ ಭಾಗದಲ್ಲಿ ಜೀವನ ಮಾಡಬಲ್ಲರು ಹೇಳಿ!? ಮ್... ನಾವೂ(ನೂ)... Continue Reading →
ಚರ್ಚೆ- ಕೊನೆಯ ಕಂತು
‘ಶ್ರೀ ರಾಮ ಸೇನೆ’ ಮಾಡಿದ್ದು ತಪ್ಪು. ಅದು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಮುಂದೆ ಈ ರೀತಿಯ ದುರ್ನಡತೆಗೆ ಅವಕಾಶ ಕೊಡುವುದಿಲ್ಲವೆಂದು ಭರವಸೆ ನೀಡಬೇಕು. ಇದು ನನ್ನ ಒತ್ತಾಯ. ಬಿಜೆಪಿಗಾಗಲೀ ಅದರ ಸಚಿವರಿಗಾಗಲೀ ‘ಪಬ್ ಸಂಸ್ಕೃತಿ ವಿರೋಧಿಸುತ್ತೇವೆ’ ಎಂದೆಲ್ಲ ಹೇಳಿಕೆ ನೀಡುವ ನೈತಿಕತೆ ಎಷ್ಟು ಮಾತ್ರವೂ ಇಲ್ಲ. ಚುನಾವಣೆಗಳಲ್ಲಿ, ರಾಜಕಾರನದ ‘ಆಪರೇಶನ್ನು’ಗಳಲ್ಲಿ, ಖಾಸಗಿ ಮೀಟಿಂಗುಗಳಲ್ಲಿ, ‘ರೆಸಾರ್ಟ್ ರಾಜಕಾರಣ’ದ ಸಂದರ್ಭಗಳಲ್ಲಿ ನೆನಪಾಗದ ಸಾಂಸ್ಕೃತಿಕ ಕಾಳಜಿ ಈಗ ಜಾಗೃತಗೊಂಡರೆ ಅದಕ್ಕೆ ಮೌಲ್ಯವಿಲ್ಲ. ಇನ್ನು ಶ್ರೀ ರಾಮ ಸೇನೆಯವರು... ಇವರಲ್ಲಿ ನನ್ನ ವಿನಂತಿ,... Continue Reading →
ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!
ಪ್ರತಿಕ್ರಿಯೆ ಅಂತ ಬರೆದಿದ್ದನ್ನೆಲ್ಲ ಚರ್ಚೆ ಅಂತ ಹಾಕಿಬಿಡೋದು ಸರಿಯಾ? ಅಂತ ಕೇಳಿದ್ದಾರೆ ವಿಕಾಸ್. ಯಾವುದೇ ಒಂದು ವಿಷಯಕ್ಕೆ ವಿಭಿನ್ನ ಅಥವಾ ಪೂರಕ ಪ್ರತಿಕ್ರಿಯೆಗಳು ಬರತೊಡಗಿದಾಗ ಅದು ಚರ್ಚೆಯ ರೂಪ ಪಡಕೊಳ್ಳುತ್ತದೆ ಅನ್ನೋದು ನನ್ನ ಅನಿಸಿಕೆ. ಅದು ಸರಿಯೇ ಅನ್ನುವುದನ್ನ ತಿಳಿದವರು ಹೇಳಬೇಕಷ್ಟೆ. ಮತ್ತಷ್ಟು ಚಿಂತನಾರ್ಹ ಕಮೆಂಟುಗಳೊಂದಿಗೆ ಈ ಚರ್ಚೆ ಮುಂದುವರೆದಿದೆ. ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪೂರ್ಣ ಲೇಖನದ ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ ಲಿಂಕ್ ಕೊಟ್ಟಿರುವೆ. ಮತ್ತೊಂದು ಮಾತು... ಸಹಬ್ಲಾಗಿಗರೊಬ್ಬರು... Continue Reading →
