ಶ್ರೀ ರಾಮ ಸೇನೆಯ ‘ಕಪಿ ಚೇಷ್ಟೆ’ ಕುರಿತ ಚರ್ಚೆಯನ್ನು ಗೆಳೆಯರು ಮುಂದುವರೆಸಿದ್ದಾರೆ. ಇಂಥ ಸಂಗತಿಗಳನ್ನು ಈ ಹೊತ್ತಲ್ಲೇ ವಿರೋಧಿಸದೆ ಉಳಿದರೆ ಪರಿಸ್ಥಿತಿ ಕೈ ಮೀರಿದ ನಂತರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸುಮ್ಮನೆ ಉಳಿದ ದೋಷ ನಮ್ಮದೇ ಆಗುವುದು. ಮಂಗಳೂರಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೇಳಿಪಟ್ಟೆ. ಹಾಗೆಯೇ ಕೆಲವು ಮಂದಿ ಬಂದ್ ಗೆ ಸಹಕರಿಸದಂತೆ ಚಿತಾವಣೆ ನಡೆಸುತ್ತಿರುವುದೂ ತಿಳಿದಿದೆ. ಇಲ್ಲಿಯೂ ಕೂಡ ರಾಜಕಾರಣವನ್ನು ಎಳೆದು ತರುತ್ತಿರುವ ಮನಸ್ಸುಗಳ ಅಸ್ವಸ್ಥತೆಯ ಬಗ್ಗೆ ಅನುಕಂಪ ಮೂಡುತ್ತಿದೆ.... Continue Reading →
ಶ್ರೀ ರಾಮ ಸೇನೆಯ ‘ಕಪಿ ಚೇಷ್ಟೆ!’
ಪ್ರಜಾಪ್ರಭುತ್ವವಿರುವ ಈ ಹೊತ್ತಿನಲ್ಲೂ ಹೀಗೆ ಯಾವುದೋ ಒಂದು ಪಡೆ ತನಗೆ ಸೇರದೇ ಹೋಗುವ ಸಂಗತಿಯನ್ನ ಈ ಪರಿಯ ಹಿಂಸೆಯ ಮೂಲಕ ವಿರೋಧಿಸತ್ತೆ ಅಂದ್ರೆ, ಪ್ರಜಾಪ್ರಭುತ್ವ ಯಾಕೆ ಬೇಕು? ಈ ಜನರಿಗೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಕೊಟ್ಟವರಾದರೂ ಯಾರು? ಇದು ರಾಮಸೇನೆಗೆ ಮಾತ್ರ ಹೇಳುತ್ತಿರುವ ಮಾತಲ್ಲ. ಇದು, ಶಿವಸೇನೆಗೂ ಅನ್ವಯವಾಗುವಂಥದ್ದು, ಕ.ರ.ವೇ ಗೂ ಅನ್ವಯವಾಗುವಂಥದ್ದು. ಧರ್ಮಾಂಧತೆಯಷ್ಟೇ ಭಾಷಾಂಧತೆ- ರಾಷ್ಟ್ರಾಂಧತೆಗಳೂ ಅಪಾಯಕಾರಿ. ಈ ಘಟನೆ ಕುರಿತು ಬರೆದಿರುವ ಇತರ ಬ್ಲಾಗ್ಗೆಳೆಯರು: ಸಂಕೇತ್, ದಾರಾಶಿಕೋ, ಟೀನಾ. ಈ ಬ್ಲಾಗುಗಳಲ್ಲಿ ನಾವು ಚರ್ಚಿಸಬಹುದಾದ ಬೇರೆ... Continue Reading →
ನೆಚ್ಚಿನ ಕವಿತೆಯ ಮತ್ತೊಂದು ಅನುವಾದ…
ಅರೆ! ಖುಶಿಯಾಗ್ತಿದೆ... ಮತ್ತೊಬ್ಬರು ನೆರೂದನ ಕವಿತೆಯ ಅನುವಾದ ಮಾಡಿದ್ದಾರೆ, ಮತ್ತು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ!! ‘ಕೂಗು’ ಬ್ಲಾಗಿನ ಚಂದಿನ ಕೂಡ ’Tonight I can Write the Saddest Lines ಕವಿತೆಯ ಅನುವಾದ ಮಾಡಿ ಪೋಸ್ಟ್ ಮಾಡಿದ್ದಾರೆಂದು ಇದೀಗ ಗೊತ್ತಾಯ್ತು. ಅನುವಾದ ನನಗೆ ಬಹಳ ಹಿಡಿಸಿತು. ಇದನ್ನ ನೀವೂ ಒಮ್ಮೆ ಓದಿ ನೋಡಲೇಬೇಕು... ಹೆಲೋ... ಮತ್ಯಾರಾದ್ರೂ ಇದ್ದಾರಾ? ದಯವಿಟ್ಟು ನಿಮ್ಮ ಅನುವಾದಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ... ನಾನಂತೂ ಅಕ್ಕರೆಯಿಂದ ಕಾಯ್ತಿರ್ತೇನೆ...
ಸಂವಾದ ಇಲ್ಲೂ ಇದೆ, ಮಿಸ್ ಮಾಡ್ಕೊಳ್ಬೇಡಿ…
ಬಹುಶಃ ಇದನ್ನ ಕೆಟ್ಟ ಕುತೂಹಲ ಅಂತಲೂ ಅಂತಾರೇನೋ? ಹಾಗೆ ನೋಡಿದರೆ ‘ಸ್ಲಂ ಡಾಗ್... ’ ಮೂವಿಯ ‘ಮೇಕಿಂಗ್’ ಅದ್ಭುತವಾಗಿದೆಯೇ ಹೊರತು ಒಳಗಿನ ಕಥೆ ಬೆರಗಿನದೇನಲ್ಲ. ಅದಕ್ಕೆ ಪ್ರಶಸ್ತಿ ಬಂದಿದ್ದಕ್ಕೇ ಬಹುಶಃ ಇಷ್ಟೆಲ್ಲ ಚರ್ಚೆಯಾಗ್ತಿರೋದು ಅಂತ ಅನಿಸುತ್ತೆ ಈಗಲೂ. ಈಗಾಗಲೇ ಸಾಂಗತ್ಯದಲ್ಲಿ ಈ ಕುರಿತು ನಡೆದ ಉತ್ತಮ ಚರ್ಚೆಗಳನ್ನು ನೋಡಿಯಾಗಿದೆ. ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಈಗ ಮ್ಯಾಜಿಕ್ ಕಾರ್ಪೆಟ್ ಈ ಸಿನೆಮಾದ ಕುರಿತ ಸಂವಾದವನ್ನು ಆಯೋಜಿಸುತ್ತಿದೆ. ಪರಮೇಶ್ವರ ಗುರುಸ್ವಾಮಿ ಅವರು ಮುಖ್ಯವಾಗಿ ಇದರಲ್ಲಿ ಪಾಲ್ಗೊಳ್ಳುವವರಿದ್ದಾರೆ. ವಿವರಗಳಿಗಾಗಿ ಇಲ್ಲಿ... Continue Reading →
‘ಸ್ಲಂ ಡಾಗ್…’ ವಾದ, ವಿವಾದ ಮತ್ತು ಸಂವಾದ
ಸಿನೆಮಾ ಕುರಿತ ಸಂವಾದಕ್ಕೆಂದು ಆರಂಭವಾದ ಬ್ಲಾಗ್ ಇಷ್ಟು ವ್ಯಾಪಕವಾಗಿ ಬೆಳೆಯುತ್ತದೆ ಮತ್ತು ಇಷ್ಟು ಗಂಭೀರವಾಗಿ ಮುಂದುವರೆಯುತ್ತದೆ ಎಂದು ಖಂಡಿತ ಅಂದುಕೊಂಡಿರಲಿಲ್ಲ. ಇದಕ್ಕಾಗಿ ನಮ್ಮ ‘ಸಾಂಗತ್ಯ’ದ ಗೆಳೆಯರಿಗೆ ಅಭಿನಂದನೆ ಹೇಳಲೇಬೇಕು. ಸದ್ಯಕ್ಕೆ ಚರ್ಚೆಯಲ್ಲಿರುವ ಸಿನೆಮಾ ‘ಸ್ಲಂ ಡಾಗ್ ಮಿಲಿಯನೇರ್’. ಈ ಸಿನೆಮಾ ಕುರಿತ ವಾದ- ಪ್ರತಿವಾದಗಳ ನಡುವೆಯೂ, ಸಿನೆಮಾ ಅತ್ಯುತ್ತಮವಾಗಿ ಚಿತ್ರಿತವಾಗಿದೆ, ವಾಸ್ತವತೆಯಿಂದ ಕೂಡಿದೆಯಾದರೂ ಪ್ರಶಸ್ತಿ ದೊರೆತುದರ ಹಿಂದೆ ಏನಾದರೊಂದು ಲಾಬಿ ಇದ್ದೇಇದೆ ಎನ್ನುವುದು ನನ್ನ ಅನಿಸಿಕೆ. ಹಾಗಂತ ಉಳಿದವರ ಮಾತುಗಳನ್ನ ಸಾರಾಸಗಟು ತಿರಸ್ಕರಿಸುತ್ತೇನೆಂದಲ್ಲ. ಹಾಗೆ ಮಾಡಲು ಸಾಧ್ಯವೂ... Continue Reading →
ಏನೋ ಬರೆಯಲು ಹೋಗಿ…
ಕವಿತೆ ಬರೆಯುವಾಗ, ಕವಿತೆ ಬಿಡಿ, ಏನನ್ನೇ ಬರಿಯುವಾಗಲೂ ಶುರು ಮಾಡುವಾಗಲೇ ಒಂದು, ಮುಗಿಸುವಾಗಲೇ ಮತ್ತೊಂದು ಆಗಿಬಿಟ್ಟಿರುತ್ತದೆ. ನನ್ನ ಪಾಲಿಗಂತೂ ಅದು ಯಾವತ್ತೂ ಹಾಗೇ ಆಗೋದು. ಪದ- ಸಾಲುಗಳಿರಲಿ, ಕೆಲವು ಸಾರ್ತಿ ಭಾವವೇ ಬದಲಾಗೋದಿದೆ. ಅಥವಾ, ಮತ್ತೆ ಕೆಲವು ಸಾರ್ತಿ ಕವಿತೆ ಪೂರ್ತಿ ಬರೆದಾದ ಮೇಲೆ ಅದನ್ನ ಮೊದಲಿಗಿಂತ ಬೆರೆಯದೇ ಆಗಿ ತಿದ್ದುವುದಿದೆ. ನಾನ್ಯಾಕೆ ಹೀಗೆಲ್ಲ ಪರದಾಡ್ತೇನೆ ಅಂತ ತಲೆಕೆರ್ಕೊಳ್ಳುವಾಗ ಮಹೇಶ ‘ನಾನೂ ನಿನ್ನ ಹಾಗೊಬ್ಬನಿದ್ದೇನೆ’ ಅಂತ ಸಮಾಧಾನ ಮಾಡಿದ್ದಾನೆ. ಆಮೇಲೆ ನೋಡ್ತಾ ಹೋದರೆ, ಬಹುತೇಕ ಜನರೆಲ್ಲ ಹಾಗೇ... Continue Reading →
ಒಂದು ಋತ್ವಿಕ್ ಘಟಕ್ ಸಿನೆಮಾ
ಮೊದಲೇ ಬಂಗಾಳದ ಆಕರ್ಷಣೆ. ಸಾಲದಕ್ಕೆ ಋತ್ವಿಕ್ ಘಟಕ್ ಸಿನೆಮಾ... ಇವರ ಸಿನೆಮಾಗಳಲ್ಲಿ ನಾನು ನೊಡಿರೋದು ಎರಡೇ. ಒಂದು, ಜುಕ್ತಿ ಟಕ್ಕೋ ಆರ್ ಗಪ್ಪೋ. ಮತ್ತೊಂದು ಮೇಘೇ ಡಕ್ಕೆ ತಾರಾ. ಈ ಎರಡನೆಯದ್ದನ್ನ ನೋಡಿ ಜಮಾನಾ ಕಳೆದಿದೆ. ಹೈಸ್ಕೂಲಿನ ದಿನಗಳಲ್ಲಿ ನೋಡಿದ್ದ ನೆನಪು. ಆದರೂ ಈ ಸಿನೆಮಾಗಳು ನನ್ನನ್ನ ತಟ್ಟಿದ ಪರಿ ಹೇಳಲಿಕ್ಕೆ ಬಾರದು. ಆದರೂ ತಕ್ಕ ಮಟ್ಟಿಗೆ ಬರೆಯುವ ಯತ್ನ ಮಾಡಿದ್ದೇನೆ. ಅದು ಹೀಗಿದೆ... ~ ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ.... Continue Reading →
‘ಸಾಂಗತ್ಯ’ದ ಸಂಗಾತ…
ದಿನಾಂಕ ೨.೧.೨೦೦೯ರ ರಾತ್ರಿ ಒಂಭತ್ತೂವರೆಗೆ ಮನೆಯಿಂದ ಹೊರಟ ನಾನು, ಟೀನಾ ಒಂಭತ್ತೂ ಐವತ್ತಕ್ಕೆ ಮೆಜಸ್ಟಿಕ್ ಸೇರಿ, ಸ್ವಲ್ಪ ಹೊತ್ತಿಗೇ ಬಂದುನಿಂತಿದ್ದ ಬಿಳಿಯ ಬಸ್ಸನ್ನ ಮಹರಾಯನೊಬ್ಬ ‘ಚಿಕ್ ಮಗ್ಳೂರ್ ಬಸ್ಸು’ ಅಂದು, ನಾವು ಆಸುಪಾಸಿನ ಜನರನ್ನ ‘ಇವ್ರೂ ಕುಪ್ಪಳ್ಳಿಗೆ ಹೊಂಟವರಿರಬೇಕು’ ಅಂತ ಗುಮಾನಿ ಕಣ್ಣಲ್ಲಿ ನೋಡುತ್ತ ಗಾಸಿಪ್ ಮಾಡ್ಕೊಂಡು ಕುಂತಿರುವಾಗ ಇದ್ದಕ್ಕಿದ್ದ ಹಾಗೇ ಟೀನಾ ತಲೆಮೇಲೆ ಬೋಧಿವೃಕ್ಷ ಚಿಗುರಿ, ‘ಮತ್ತೊಂದ್ಸಲ ವಿಚಾರಿಸ್ಕೊಂಡ್ ಬಾರೇ’ ಅಂದು, ನಾನು ಹೋಗಿ ಕೇಳಲಾಗಿ ಅದೇ ಬಿಳಿ ಬಸ್ಸು ಕುಪ್ಪಳ್ಳಿಗೆ ಹೋಗೋದು ಗ್ಯಾರಂಟಿಯಾಗಿ, ನಮ್ಮ... Continue Reading →
ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!
ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು. ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ.... ಆಆಆಆಆ.......... ಖ್ಷೀ....... ಉಹ್... ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು! ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು... Continue Reading →
ದಕ್ಷಿಣೇಶ್ವರ ಯಾತ್ರೆಗೆ…
ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ... ( ಕುವೆಂಪು ರಚನೆ) ಸಾಕಾಗಿದೆ. ಒಂದು ಹತ್ತು ದಿನ ತಣ್ಣಗೆ ನನ್ನ ನೆಚ್ಚಿನ ಸ್ಥಳದಲ್ಲಿ ಇದ್ದು ಬರ್ತೇನೆ. ಪರಮಹಂಸರು, ಶಾರದಾ ದೇವಿ, ವಿವೇಕಾನಂದರು ಓಡಾಡಿದ ಜಾಗಗಳನ್ನ ಕಣ್ತುಂಬಿಸಿಕೊಂಡು ಬರ್ತೇನೆ. ಕುವೆಂಪು ಹಾಡಿದ್ದಂತೆ ಪ್ರತಿ ದಿನವೂ ಇದನ್ನು ನಾನು ಹಾಡುವವಳೇ. ಹಾಗೆಂದೇ ಮತ್ತೆ ಕೈಬೀಸಿ ಕರೆಯುತ್ತಿರುವ ದಕ್ಷಿಣೇಶ್ವರದತ್ತ ಪ್ರಯಾಣ. ನಾಳೆ ಹೊರಟಿದ್ದೇನೆ. ಬಂದಮೇಲೆ, ಕುವೆಂಪು ಅವರ ಅಧ್ಯಾತ್ಮಿಕ ಆಸಕ್ತಿಯ ಬಗ್ಗೆ, ಅವರು ರಾಮಕೃಷ್ಣ... Continue Reading →
