ಕೊಳಲ ತರಂಗ ಕೊಳದ ತರಂಗ ಸೆಳೆತಕೆ ಸಿಕ್ಕ ರಾಧೆ ಯಂತರಂಗ ಕ ಲ ಕಿ ರಾಡಿ ~ ಕಣ್ಣಾ ಒಳಗಿದ್ದು ಕಾಡಬೇಡ ವಿಶ್ವರೂಪಿ ನಿನ್ನಗಲ ಎತ್ತರಕೆ ಸಾಲದಿದು ಪುಟ್ಟ ಹೃದಯ. ತುಣುಕು ಮಾತಿಗೆ ತುಂಬುವುದು ನಗೆ ಮಿಂಚಿಗೆ ಸುಳ್ಳು ಪ್ರೀತಿಗೂ ತುಂಬುವುದು ನೆನಪಿಗೂ ವಿರಹಕೂ ಸಾವಿರ ಬಾಳ ಫಲಗರೆವ ಒಂದು ಧನ್ಯ ನೋಟಕೂ ~ ಮಧು ತೀರಿದ; ರವಿ ತೆರಳಿದ... ಮಧು ತೀರಿದ, ರವಿ ತೆರಳಿದ ಹೊತ್ತೀಗ ದುಂಬಿಗೆ ಧ್ಯಾನದ ಸಮಯ ಮುದುಡದೆ ವಿಧಿಯೇ ಕಮಲಕೆ? ರಾಧೆಗೆ?... Continue Reading →
ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?
ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ" ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ. ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ... Continue Reading →
