ನನಗೆ ಬೇಜಾರಾಗಿದೆ. ಇದೇನೂ ಅಂಥ ದೊಡ್ಡ ಸಂಗತಿ ಅಲ್ಲದಿರಬಹುದು. ಸಾಮಾನ್ಯ ಮನುಷ್ಯರ ಮಾತುಗಳಿಗೆ ಬೆಲೆ ಇರದ, ದನಿ ಇರದ ಜಗತ್ತಿದು ಅನ್ನುವುದು ಗೊತ್ತಾದ ಬೇಸರ. ಏನೂ ಅಲ್ಲದವರಿಗೆ ಅಸ್ತಿತ್ವವೇ ಇಲ್ಲವಲ್ಲ ಅನ್ನುವ ಬೇಸರ. ನನ್ನ ‘ಪ್ರಕಟವಾಗದ’ ಪುಸ್ತಕದ ರಿವ್ಯೂ ಪ್ರಕಟಗೊಂಡಿದ್ದನ್ನ ಪ್ರಶ್ನಿಸಿ ಇಶ್ಯೂ ಮಾಡುವುದು ಉದ್ದೇಶವಲ್ಲ. ಇದರ ಹಿನ್ನೆಲೆಯಲ್ಲಿ, ಯಾವುದೇ ವ್ಯಕ್ತಿಯ ಭಾವನೆಗೆ ಸ್ಥಾಪಿತ, ಪ್ರಸಿದ್ಧ ಮತ್ತು ಉನ್ನತ ಜಾಗದಲ್ಲಿರುವವರು ತೋರುವ ಅಲಕ್ಷ್ಯವನ್ನು ಕುರಿತು ಮಾತಾಡುವುದಷ್ಟೆ ನನ್ನ ಬಯಕೆ. ನಾನು 2ಬಾರಿ ನನ್ನ ಪುಸ್ತಕ ಪ್ರಕಟವಾಗಿಲ್ಲ ಎಂದು... Continue Reading →
ಮಾತಾಡೆನೆಂಬ ಮುನಿಸು ಮಂದಿಗೆ…
ನನ್ನ ಮನೆಯ ಗೋಡೆಗಳಿಗೆ ಕಿವಿಗಳನಿರಿಸಿಲ್ಲ ಮಾತಾಡಲಿ ಯಾರ ಕೂಡ? ಮಾತೆಂದರೆ ವಾಕರಿಕೆ ಗೆಳೆಯಾ ಮುತ್ತೆಂದು ಅರಸುತಿದ್ದ ನೀ ಜತೆಗಿಲ್ಲದೆ... ಕಾದು ಕಾಯಿಸುವ ಜೀವವಿರಲುಕ್ಕಿ ಸುರಿಯುತಿತ್ತು ಮಾತು, ಸತ್ತ ದಿನಗಳ ಹೆಣದ ತಂಪಿಗೆ ಸೆಟೆದು ಬಿದ್ದಿವೆ ಪದಗಳು. ಮಾತಾಡೆನೆಂಬ ಮುನಿಸು ಮಂದಿಗೆ, ದನಿಯನೆಲ್ಲಿಂದ ಬಗೆದು ತರಲಿ ನಾನು?
ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…
ಒಮ್ಮೊಮ್ಮೆ ಅನಿಸುತ್ತದೆ ಸಾವನ್ನ ತಟ್ಟೆಯೊಳಗಿಟ್ಟು ಚೂರು ಚೂರೆ ಹರಿದು ತಿನ್ನಬೇಕು ನನಗೆ ಸಾವಿನ ಹಸಿವು... ಅನಿಸುತ್ತದೆ ಸಾವನ್ನ ತಬ್ಬಿ ಚುಂಬಿಸಬೇಕು ತೋಳಲ್ಲಿ ಬಳಸಿ ಇಂಚಿಂಚು ಕರಗುತ್ತ ಕಳೆದುಹೋಗಬೇಕು ಒಲ್ಲದ ಮದುವೆಯಂತೆ ಇದು ಕಟ್ಟಿಕೊಂಡ ಬದುಕು ಅನಿಸುತ್ತದೆ, ಕಳ್ಳಾಟವಾಡುತ್ತ ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು... ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.
