ಹಾಗೆ ನೋಡಿದರೆ, ಸಿದ್ದು ದೇವರ ಮನಿ ಎಂಬ ಯುವ ಕವಿಯ ಕವನ ಸಂಕಲನ ಯಾವತ್ತೋ ಪುಸ್ತಕವಾಗಿ ಹೊರಬರಬೇಕಿತ್ತು. ಆದರೆ, ಚೆಂದ ಚೆಂದದ ಕವಿತೆಗಳನ್ನು ಬರೆದೂ ಗೆಳೆಯರು ‘ಚೆನ್ನಾಗಿದೆ’ ಅಂದಾಗ ಸ್ವತಃ ‘ಹೌದಾ’ ಅನ್ನುತ್ತ ಬೆರಗಿಗೆ ಒಳಗಾಗುವ ಸಂಕೋಚದ ಹುಡುಗ ಸಿದ್ದು, ಹಾಗೆ ತನ್ನಿಂದ ತಾನೆ ಪುಸ್ತಕ ಹೊರಡಿಸುವುದು ಅಸಾಧ್ಯದ ಮಾತಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಆಯ್ದ ಯುವ ಕವಿಗಳ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ‘ಪ್ರೋತ್ಸಾಹ ಧನ ಪ್ರಶಸ್ತಿ’ಗೆ ಸಿದ್ದುವಿನ ಕವನ ಸಂಕಲನ ಆಯ್ಕೆಯಾಗಿದೆ.... Continue Reading →
