ತಪ್ಪೊಪ್ಪಿಗೆ

ಇದೋ! ಕತ್ತಲಾಗಿದೆ. ನಿನ್ನ ಬೆತ್ತಲು ಕಾಣುವುದಿಲ್ಲ ನಿನಗೂ... ನಾಚಿಕೆ ಕಿತ್ತೆಗೆ, ಒಳಗನೆಲ್ಲ ಹರಡಿ ಹಗುರಾಗು. ಸುಳ್ಳು ನಾಟಕದ ಹೊರೆ ಎಷ್ಟೆಂದು ಹೊರುತ್ತೀ? -ಆತ್ಮ ಸಾಕ್ಷಿಯ ಮಾತು.   ತಪ್ಪೊಪ್ಪಿಗೆಯ ಹೊತ್ತಲ್ಲಿ ಬೆಳೆಯುತ್ತಿದೆ ಪಟ್ಟಿ॒   ಎದೆಗೋರಿಯ ಕನವರಿಕೆ, ಹೇಳಲಾಗದ ಅವನ ಹೆಸರು; ಬರೆಯದೆ ಬಿಟ್ಟ ಕವಿತೆ, ಮಡಚಿಟ್ಟ ಪುಟಗಳು. ಸಂತನೊಡಲಲ್ಲಿ ಹಚ್ಚಿಟ್ಟ ಹೆಣ ಸುಡುವ ಕಿಚ್ಚು! ಒಂದೇ, ಎರಡೇ?   ನಾ ನಂಬಿಕೊಂಡ ನನ್ನ ಸುಳ್ಳುಗಳು, ನಾನಪ್ಪಿಕೊಂಡ ನನ್ನ ಶತ್ರುಗಳು, ನಾ ಕೊಂದ ನನ್ನ ಇಷ್ಟಗಳು, ನನ್ನದಲ್ಲದ... Continue Reading →

ಬೇಳೂರು ಸುದರ್ಶನರ ಕವಿತೆ, ಅನುಮತಿಯಿಲ್ಲದೆ…

ಇದು ನನ್ನ `ಸಿಡಿಲಾಗಲು ಕಾದಿದ್ದೇನೆ' ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿತೆ. ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದು!! ನನಗಿಷ್ಟವಾಯ್ತು ಅಂತಲೇ ನಿಮ್ಮ ಜತೆ ಹಂಚಿಕೊಳ್ತಿದೇನೆ, ಅವರ ಅನುಮತಿ ಪಡೆಯದೆ... ಅವರು ಮನ್ನಿಸಿಯಾರು ಎನ್ನುವ ಭರವಸೆಯಿಂದ!     ~ಚೇತನಾ ನನಗೆ ಶಬ್ದಗಳ ಪರಿಚಯವಿದೆ ಎಂದ ಮಾತ್ರಕ್ಕೆ ಮಾತನಾಡುತ್ತೇನೆ ಎಂದೆಲ್ಲ ಖುಷಿಪಡಬೇಡಿ. ನಾನು ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು. ನನಗೆ ನಿಶ್ಶಬ್ದದ ಬಗ್ಗೆ ಒಲವಿದೆ ಎಂದಮಾತ್ರಕ್ಕೆ ಸುಮ್ಮನಿರುತ್ತೇನೆ ಎಂದೆಲ್ಲ ದುಃಖಿಸಬೇಡಿ. ನಾನು ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು. ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ ನೀವು... Continue Reading →

Create a free website or blog at WordPress.com.

Up ↑